ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ರತ್ನ ಎಂಬುದು ನಾಗರಿಕ ಪ್ರಶಸ್ತಿಯಾಗಿದ್ದು,ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಕೊಡಲಾಗುತ್ತದೆ.ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ನೀಡುತ್ತದೆ.ಇದೊಂದು ಸಾರ್ವಜನಿಕ ವರ್ಗದ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದ್ದು 1992ರಲ್ಲಿ.ಮೊದಲ ಬಾರಿಗೆ ಕುವೆಂಪು ಅವರಿಗೆ ಮತ್ತು ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರಿಗೆ ನೀಡಲಾಯಿತು.ಈ ಪ್ರಶಸ್ತಿಯನ್ನು ಇದುವರೆಗೆ ಮಹತ್ತರ ಸಾಧನೆ ಮಾಡಿದ 10 ಜನ ಗಣ್ಯ ವ್ಯಕ್ತಿಗಳಿಗೆ ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಈ ಕೆಳಗಿನಂತಿವೆ.
ಕ್ರ.ಸಂ. |
ಹೆಸರು |
ಗೌರವಿಸಿದ್ದು |
ಕ್ಷೇತ್ರ |
1 |
ಕುವೆಂಪು |
1992 |
ಸಾಹಿತ್ಯ |
2 |
ಡಾ.ರಾಜ್ ಕುಮಾರ್ |
1992 |
ಸಿನೆಮಾ |
3 |
ಎಸ್.ನಿಜಲಿಂಗಪ್ಪ |
1999 |
ರಾಜಕೀಯ |
4 |
ಸಿ.ಎನ್.ಆರ್.ರಾವ್ |
2000 |
ವಿಜ್ಞಾನ |
5 |
ದೇವಿ ಪ್ರಸಾದ್ ಶೆಟ್ಟಿ |
2001 |
ವೈದ್ಯಕೀಯ |
6 |
ಭೀಮಸೇನ್ ಜೋಷಿ |
2005 |
ಸಂಗೀತ |
7 |
ಶ್ರೀ ಶಿವಕುಮಾರ ಸ್ವಾಮಿಗಳು |
2007 |
ಸಾಮಾಜಿಕ ಸೇವೆ |
8 |
ಡಾ.ಡಿ.ಜವರೇಗೌಡ |
2008 |
ಶಿಕ್ಷಣ ಮತ್ತು ಸಾಹಿತ್ಯ |
9 |
ಡಾ.ವೀರೇಂದ್ರ ಹೆಗ್ಗಡೆ |
2009 |
ಸಾಮಾಜಿಕ ಸೇವೆ |
10 |
ಪುನೀತ್ ರಾಜ್ಕುಮಾರ್ |
2021 |
ಸಿನೆಮಾ,ಸಾಮಾಜಿಕ ಸೇವೆ |